ವಿಶೇಷ
ಚಾಣಕ್ಯನ ಹದಿನಾರು ಉಕ್ತಿಗಳು
ಸಹೃದಯ ಗೋಷ್ಠಿಯಲ್ಲಿ "ಪು.ತಿ.ನ. ಅವರ ಕಾವ್ಯಗಳ ರಸಯಾತ್ರೆ"!!!
-ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫ಼ೋರ್ನಿಯ.
ಸಹೃದಯ ಗೋಷ್ಠಿ ಹಮ್ಮಿಕೊಂಡಿದ್ದು, ಸಹೃದಯತೆಗೆ ಹೆಸರಾದ ನಮ್ಮ ಬೇ ಏರಿಯಾದ ಅಪರೂಪ ಮತ್ತು ಅನುರೂಪ ದಂಪತಿಗಳಾದ, ಅಲಮೇಲು ಮತ್ತು ತಿರುನಾರಾಯಣ ಐಯ್ಂಗಾರ್ ಅವರು. ಸಾಹಿತ್ಯಾಸಕ್ತರೂ, ಸ್ವತಃ ಕವಿಗಳೂ ಆದ ಈ ದಂಪತಿಗಳು ಸರಟೋಗಾದಲ್ಲಿರುವ ಅವರ ಸುಂದರವಾದ ಸ್ವಗೃಹದಲ್ಲಿ ಈ ಗೋಷ್ಠಿಯನ್ನು ಜುಲೈ ೨೬ ರ ಶನಿವಾರ ಸಂಜೆ ಏರ್ಪಡಿಸಿದ್ದರು. ಈ ಗೋಷ್ಠಿಯ ಇನ್ನೊಂದು ವಿಶೇಷತೆ ಏನೆಂದರೆ, ಪು ತಿ ನ ಅವರೇ ಈ ವೇದಿಕೆ ಮೇಲೆ ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿ ನಂತರ ಹಲವಾರು ಸುಪ್ರಸಿದ್ಧ ಕನ್ನಡ ಸಾಹಿತಿಗಳು, ಡಾ. ಜಿ.ಎಸ್. ಶಿವರುದ್ರಪ್ಪ, ಹೆಚ್. ಎಸ್. ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿ ಅಣಿಮಾಡಿದ ವೇದಿಕೆ ಇದು.
ಬರಿ ಓಳು !
-ಶ್ರೀನಾಥ್ ಭಲ್ಲೆ, ಮುಂಬೈ
ನನಗಂತೂ ಸುಳ್ಳು ಹೇಳಲಿಕ್ಕೆ ಬರೋಲ್ಲ ...... ವಾವ್ ... ನೋಡಿ, ಅದೇ ದೊಡ್ಡ ಸುಳ್ಳು ...... ನಿಂತ ನಿಲುವಲ್ಲೇ ಸುಳ್ಳು .... ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು .... ಸುತ್ತಿಕೊಳ್ಳಲೂ ಕಷ್ಟವಾಗುವಂತೆ ರೀಲು ...
ಹೇಗೆ ಬರಲಿ...
- ಗುರು ಬಬ್ಬಿಗದ್ದೆ
ಮಾವ ನಿನ್ನ ಮನೆಗೆ, ಅಳಿಯನಾಗಿ ಬರಲೇ
ಮಗನಾಗಿ ಬರಲೇ, ಬೆಳಕಾಗಿ ಬರಲೇ
ನಿನ್ನ ಮಗಳ ಮೇಲೆ ಒಲವಾಗಿ ಬರಲೇ
ನದಿಯಾಗಿ ಬರಲೇ, ಪ್ರೀತಿ ಅಲೆಯನ್ನು ತರಲೇ ೧
ಮಧುಕರ ವೃತ್ತಿ ಎನ್ನದು
ರಾಗ ಭೈರವಿ /ಆದಿ ತಾಳ
ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ ||
ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ ||
ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ || ೧ ||
ರಂಗನಾಥನ ಗುಣ ಹಿಂಗದೆ ಪಾಡುತ್ತ ಮುಂದೆ ಓದಿ »
ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ
ರಾಗ ನವರೋಜು /ಆದಿ ತಾಳ
ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ || ಪಲ್ಲವಿ ||
ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ || ೧ ||
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ ಮುಂದೆ ಓದಿ »
ಮಿಕ
-ಅಬ್ದುಲ್ ಹಮೀದ್ ಪಕ್ಕಲಡ್ಕ
(ಇತ್ತೀಚೆಗೆ ಪ್ರಕಟವಾದ ಬಿಳಿಗೋಡೆ ಕಥಾಸಂಕಲನದಿಂದ ಆಯ್ದ ಕಥೆ)
’ವಿದ್ಯಾಧರ ವಿನಯ ಕುಮಾರ ಅರಸಿನ ಕಟ್ಟೆ, ಒಳಗೆ ಬನ್ನಿ’
ಕರೆ ಬಂದೊಡನೆ ಎದ್ದು ನಿಂತ ವಿನಯ, ಇಂಟರ್ವ್ಯೂಗೆ ಬಂದ ಅಭ್ಯರ್ಥಿಗಳತ್ತ ಒಮ್ಮೆ ಕಣ್ಣು ಹಾಯಿಸಿ ಕರೆಬಂದ ರೂಮಿನತ್ತ ತೆರಳಿದ.   ಪೂರ್ತಿ ಓದಿ... »
ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?
- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬಾಯಿಲ್ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).   ಪೂರ್ತಿ ಓದಿ... »
ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೩
-ಡಾ. ಬಿ.ಆರ್. ಸತ್ಯನಾರಾಯಣ
ಕಳೆದ ವಾರದಿಂದ ಮುಂದುವರೆದ ಭಾಗ...
ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ಹದಿನೈದು ನಿಮಿಷ ಬಿಟ್ಟುಕೊಂಡು ಬಾ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ಥ್ಯಾಂಕ್ಸ್ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು.   ಪೂರ್ತಿ ಓದಿ... »
ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
-ಅರ್ಶದ್ ಹುಸೇನ್ ಎಂ.ಹೆಚ್, ಶಾರ್ಜಾ
ನಗರಗಳು ಬೆಳೆದಂತೆ ಕಾರುಗಳ ಸಂಖ್ಯೆಯಲ್ಲಿ ಹೆಚ್ಚಳವೂ ಸಹಜ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಪಾರ್ಕ್ ಮಾಡುವುದು ಎಲ್ಲಿ ಎಂಬ ಸಮಸ್ಯೆ ವಿಶ್ವದ ಎಲ್ಲಾ ಪ್ರಮುಖ ನಗರಗಳನ್ನು ಕಾಡುತ್ತಿದೆ. ಹಲವು ನಗರಗಳು ಹಲವು ಕಟ್ಟಡಗಳನ್ನು ಕಟ್ಟಿವೆ. ಇಂದಿನ ವರದಿಯ ಪ್ರಕಾರ ಶಾರ್ಜಾದಲ್ಲಿ ಏಳು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ಅಬುಧಾಬಿ, ದುಬೈಗಳಲ್ಲೂ ಕಾರು ಪಾರ್ಕಿಂಗಿಗಳಿಗೆಂದೇ ವಿಶೇಷ ಕಟ್ಟಡಗಳಿವೆ. ಆದರೆ ಆ ಕಟ್ಟಡ ಕಟ್ಟಲಿಕ್ಕೂ ಸ್ಥಳವಿಲ್ಲದಿದ್ದರೆ?   ಪೂರ್ತಿ ಓದಿ... »
ಸಾಮಾನ್ಯ ಸಂಸಾರಿಗಳ ನಿತ್ಯದ ಶ್ರುತಿ
ಗಿರೀಶ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ಅವರ ಉಳಿದೆಲ್ಲ ಸಿನಿಮಾಗಳಿಗಿಂತ ಭಿನ್ನವಾದುದು. ಈ ಭಿನ್ನತೆ ಮುಖ್ಯವಾಗಿ ಕಾಣಿಸಿಕೊಳ್ಳುವುದು ಚಿತ್ರ ಕಥನದ ಹೆಣಿಗೆ ಮತ್ತು ವಿನ್ಯಾಸದಲ್ಲಿ. ಒಂದು ಸಿನಿಮಾವನ್ನು ನಾವು ನೋಡುವಾಗ ಮುಂದೇನಾಗುತ್ತದೆ ಎಂಬುದೇ ನಮಗೆ ಮುಖ್ಯವಾದರೆ ನಾವು ನೋಡುವ ಬಗೆ ಬೇರೆ. ಹಾಗೆಯೇ ಮುಂದೇನಾಗುತ್ತದೆ ಎಂಬುದು ಅಮುಖ್ಯವಾದರೆ ನಾವು ನೋಡುವ ಬಗೆ ಬೇರೆ. ಸಸ್ಪನ್ಸೇ ಮುಖ್ಯವಾಗಿ ಬಿಟ್ಟರೆ, ನಾಟಕೀಯತೆ ಮುಖ್ಯವಾಗಿ ಸಿನಿಮಾ ತನ್ನ ಶಿಖರ ಸ್ಥಿತಿಯಲ್ಲಿ ಚೂಪಾಗುವ ಚುರುಕಿನಲ್ಲಿ ಪಿರಾಮಿಡ್ನಂತೆ ಮೇಲೇರುತ್ತದೆ. ಆದರೆ ಈ ಸಿನಿಮಾದಲ್ಲಿ ಮುಂದೇನು ಎನ್ನುವುದು ಅಷ್ಟು ಮುಖ್ಯವಲ್ಲ. ಆದ್ದರಿಂದ ಹೆಣಿಗೆಯಲ್ಲಿ ಒಂದು ಅದ್ಭುತವಾದ ಅಲ್ಲಲ್ಲೇ ಸಲ್ಲುವ ಸಾಂಧ್ರತೆ ಇದೆ. ಸಿನಿಮಾದಲ್ಲಿ ನಾವು ಕಾಣುವುದೆಲ್ಲ ಮನಸ್ಸಿಗೆ ಇಳಿದು ಕಾಡುತ್ತವೆ. ವೈಚಾರಿಕವಾಗಿಯಲ್ಲ; ಅನ್ಯೋಕ್ತಿಯನ್ನು (ಅಲಿಗರಿಯನ್ನು) ನಾವು ಬಗೆಯುವ ರೀತಿಯಲ್ಲಿ ಅಲ್ಲ; ಬದಲಿಗೆ ಕಂಡದ್ದನ್ನೇ ಅದರಲ್ಲಿ ಇಣುಕುವ ಒಳಾರ್ಥಗಳನ್ನು ಹೊಳೆಸಿಕೊಳ್ಳಲೆಂದು, ಕಂಡದ್ದರಲ್ಲಿ ತಂಗುವಂತೆ ಮಾಡುವ ಧ್ಯಾನಶೀಲ ಮನಸ್ಥಿತಿಯಲ್ಲಿ. read more »
Languages and India
India is a civilisation and not a Nation in the sense Europe evolved the notion of nation states after the collapse of Papal power. Both Tagore and Gandhi had realised this during the struggle for freedom in India. In his Hind Swaraj Gandhi thought that 'modern western civilization' was evil and our struggle for freeing ourselves from British rule should be a struggle to free even Britain from its bondage to the notions of modern civilisation. After what we have seen of the failure of the Soviet Union and the avaricious culture of modern China, and the globalising India we have come to realise that concentration of power in any form is evil, and we need not reject wholesale the great ideas of anarchist thinking that is seen in visionary thinkers like Tolstoy and Gandhi. They believed in self regulating small communities, largely rural communities in the case of Gandhi, for human kind to be creative and live in harmony with Nature. read more »
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
ಇದೇನು ಬಹಳ ಹಿಂದಿನ ಸಂಗತಿಯಲ್ಲ. ಕೇವಲ ನಾಲ್ಕು ವರ್ಷಗಳ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ದಿನಗಳ ಮಾತು. 2004ರ ಜುಲೈ 24ರಂದು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಧರ್ಮಸಿಂಗ್ 'ಕೃಷ್ಣಾ ನದಿಯ ನೀರಿನಲ್ಲಿ ತನ್ನ ಪಾಲಿನಿಂದ ಒಂದು ತೊಟ್ಟು ನೀರನ್ನೂ ಕರ್ನಾಟಕ ಆಂಧ್ರಪ್ರದೇಶಕ್ಕೆ ನೀಡದು. ಈ ಮುಖ್ಯಮಂತ್ರಿ ಆಂಧ್ರಪ್ರದೇಶಕ್ಕೆ ನೀರನ್ನು ಬಿಡುವ ತಪ್ಪು ಮಾಡಿಲ್ಲ. ಈ ಬಗೆಯ ಯಾವ ಉದ್ದೇಶವನ್ನೂ ಇಟ್ಟುಕೊಂಡಿಲ್ಲ' ಎಂದು ಆವೇಶ ಭರಿತರಾಗಿ ಹೇಳಿದರು.
ಕರ್ನಾಟಕ ವಿಧಾನಸಭೆಯಲ್ಲಿ ಪ್ರತೀ ವರ್ಷವೂ ಇಂಥ ಆವೇಶ ಭರಿತ ಮಾತುಗಳನ್ನು ಕೃಷ್ಣಾ, ಕಾವೇರಿ ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ ತನಕವೂ ಯಾವ ಮುಖ್ಯಮಂತ್ರಿಯೂ ಕೃಷ್ಣಾ ಮೇಲ್ದಂಡೆ ಯೋಜನೆಯ ಪೂರ್ಣ ಕಾಮಗಾರಿ ಮುಗಿದಿಲ್ಲದೇ ಇರುವುದರ ಕುರಿತು ಇಷ್ಟು ಅವೇಶದಿಂದ ಮಾತನಾಡಿದ್ದಿಲ್ಲ. ಬಚಾವತ್ ತೀರ್ಪಿನ ಅನ್ವಯ ತನಗೆ ದೊರೆತಿರುವ ನೀರಿನ ಎಷ್ಟು ಭಾಗವನ್ನು ಕರ್ನಾಟಕ ಬಳಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುವುದಕ್ಕಾಗಲೀ ಕೇಳುವುದಕ್ಕಾಗಲೀ ಯಾವ ರಾಜಕಾರಣಿಯೂ ಮನಸ್ಸು ಮಾಡಿಲ್ಲ. ಈಗ ಹೊರಬಿದ್ದಿರುವ ಮಾಹಿತಿಯೇನಿದ್ದರೂ ಆನುಷಂಗಿಕವಾಗಿ ಚರ್ಚೆಗಳ ಮಧ್ಯೆ ಇಲ್ಲವೇ ಸಂಶೋಧಕರ ಆಸಕ್ತಿಯಿಂದ ಹೊರಬಿದ್ದಿರುವ ವಿಷಯ ಮಾತ್ರ. ಮುಂದೆ ಓದಿ »
